+91 94487 53991    +91 86606 36951    barahagararaprakashakarasangha@gmail.com

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ (ರಿ.)

 
 
 
© Adrian Dreßler
 
© Adrian Dreßler
 
© Adrian Dreßler
 
© Adrian Dreßler
 
© Adrian Dreßler
 
 
 
 
 
 
 
 

ಸಂಘದ ಬಗ್ಗೆ

ನಿಡಸಾಲೆ ಪುಟ್ಟಸ್ವಾಮಯ್ಯ

ಅಧ್ಯಕ್ಷರು

ಆರ್. ದೊಡ್ಡೆಗೌಡ

ಕಾರ್ಯದರ್ಶಿ

ಪ್ರಾಸ್ತಾವಿಕ ನುಡಿ

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ದಿನಾಂಕ: 01-11-2003ರಿಂದ ಅಸ್ತಿತ್ವಕ್ಕೆ ಬಂದಿದ್ದು, ನಿಯಮಾನುಸಾರ ನೋಂದಣಿಯಾಗಿರುತ್ತದೆ. ನವದೆಹಲಿಯ ದಿ ಫೆಡರೇಷನ್ ಆಫ್ ಪಬ್ಲಿಷರ್ಸ್ ಅಂಡ್ ಬುಕ್ ಸೆಲ್ಲರ್ಸ್ ಅಸೋಸಿಯೇಷನ್ಸ್ ಇನ್ ಇಂಡಿಯಾ ಹಾಗೂ ಬೆಂಗಳೂರು ಬುಕ್ ಸೆಲ್ಲರ್ಸ್ ಅಂಡ್ ಪಬ್ಲೀಷರ್ಸ್ ಅಸೋಸಿಯೇಷನ್ಸ್‍ನ ಸದಸ್ಯತ್ವವನ್ನು ಹೊಂದಿರುತ್ತದೆ. ಉತ್ಸಾಹಿ, ಕ್ರಿಯಾಶೀಲ, ಸಮಾನ ಮನಸ್ಕ ಬರಹಗಾರರು ಮತ್ತು ಪ್ರಕಾಶಕರ ಸಂಘಟಿತ ಸಂಸ್ಥೆ ಈ ಸಂಘ. ಕನ್ನಡ ಪುಸ್ತಕೋದ್ಯಮದ ಸರ್ವತೋಮುಖ ಅಭಿವೃದ್ಧಿ ಹಾಗೂ ಪುಸ್ತಕ ಓದುವ ಅಭಿರುಚಿಯನ್ನು ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಬೆಳೆಸುವ ಮೂಲಕ ಪುಸ್ತಕ ಸಂಸ್ಕೃತಿಗೆ ಸಹಕಾರಿಯಾಗುವಂತಹ ಹಲವು ಉದ್ದೇಶಗಳೊಂದಿಗೆ ಈ ಸಂಘವನ್ನು ಸ್ಥಾಪಿಸಿ, ಕಳೆದ 18 ವರ್ಷಗಳಿಂದ ಅನೇಕ ಮಹನೀಯರ ಸಹಕಾರದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ.

ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿನ ಪುಸ್ತಕ ಆಯ್ಕೆ ಮತ್ತು ಖರೀದಿ ಪ್ರಕ್ರಿಯೆಯಲ್ಲಿನ ನ್ಯೂನತೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಾ ಲೇಖಕ/ಲೇಖಕ-ಪ್ರಕಾಶಕ/ ಪ್ರಕಾಶಕ/ಓದುಗ ಮತ್ತು ಇಲಾಖೆಯ ನಡುವೆ ಸೇತುವೆಯಾಗಿ ಸಾಮರಸ್ಯದಿಂದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಾ, ಪುಸ್ತಕೋದ್ಯಮವನ್ನೇ ನಂಬಿ, ಪುಸ್ತಕ ಪ್ರಕಟಿಸಿ, ಸಂಕಷ್ಟಕ್ಕೆ ಸಿಲುಕುತ್ತಿರುವ ಸಾವಿರಾರು ಕುಟುಂಬಗಳಿಗೆ ಧೈರ್ಯ ತುಂಬಿ, ಅವರ ಆತಂಕವನ್ನು ದೂರ ಮಾಡುವ ಕೆಲಸವನ್ನು ಕನ್ನಡದ ಹಿರಿಯ-ಕಿರಿಯ ಲೇಖಕರ, ಪ್ರಕಾಶಕರ ಸಹಕಾರ ಹಾಗೂ ಬೆಂಬಲದಿಂದ ನಿರ್ವಹಿಸುತ್ತಾ ಸಂಘವು ಮುಂದೆ ಸಾಗಿದೆ.

ಸಂಘದ ಪ್ರಯತ್ನ

ವಿವಿಧ ಲೇಖಕರ ಕೃತಿಗಳು ಹಾಗೂ ೨೦೨೪ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜ್ ಸಭಾಂಗಣದಲ್ಲಿ ದಿನಾಂಕ: ೨೩-೧೨-೨೦೨೩ರಂದು ನಡೆಯಿತು.
ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರನ್ನು ಸಂಘದ ನಿಯೋಗ ಭೇಟಿಯಾಗಿ ಚರ್ಚಿಸಿದ್ದು ಹಾಗೂ ಸಂಘದ ಸಮಾರಂಭದಲ್ಲಿ ಭಾಗವಹಿಸಿದ್ದ ಚಿತ್ರಗಳು.
ಶಿಕ್ಷಣ ಸಚಿವರನ್ನು ಭೇಟಿಯಾಗಿ ಪುಸ್ತಕೋದ್ಯಮದ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿರುವುದು.
ದಿನಾಂಕ: 27-03-2023ರಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಪುಸ್ತಕ ಖರೀದಿಗಾಗಿ ಹಣ ಬಿಡುಗಡೆ ಮಾಡಿಸಲು ಸರ್ಕಾರವನ್ನು ವಿನಂತಿಸಲು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದ ಸ್ವಾಮೀಜಿಯವರ ಬಳಿ ಸಂಘದ ನಿಯೋಗವು ತೆರಳಿ ಮನವಿ ಮಾಡಿದ ಸಂದರ್ಭ.

ಸಂಘದ ಬಗ್ಗೆ ಸಂದೇಶ